Wednesday, November 18, 2009

ಪಕ್ಷಿ ಪ್ರೇಮಿ ಸಲೀಂ ಅಲಿ


ಪಕ್ಷಿ ಪ್ರೇಮಿ ಎಂದೇ ವಿಶ್ವವಿಖ್ಯಾತ ಪಕ್ಷಿ ತಜ್ನ ಸಲೀಂ ಮೊಹಿಜ್ಜಿದ್ದಿನ್ ಅಲಿ ೧೯೦೬ ನವ್ಹೆಂಬರ್ ೧೨ ರಂದು ಜನನ ಬಾಲ್ಯದಿಂದಲೇ ಸಲೀಂ ಅಲಿಯವರಿಗೆ ನಿಸರ್ಗದ ನಡುವೆ ಓಡಾಡಿಕೊಂಡಿರುವ ಹಂಬಲ. ಇದೇ ಕಾರಣವೋ ಏನೋ ಅವರು ವಿಶ್ವವಿದ್ಯಾಲಯದ ಯಾವ ಪದವಿಯನ್ನು ತೆಗೆದುಕೊಳ್ಳಲಿಲ್ಲ ಪ್ರಕ್ರತಿಯೇ ಅವರಿಗೆ ಪಾಠಶಾಲೆಯಾಯಿತು.

ಭರ್ಮಾದಲ್ಲಿ ಕೆಲಸದಲ್ಲಿದ್ದ ಸೋದರನಿಗೆ ಸಹಾಯವಾಗಲೆಂದು ಅಲ್ಲಿಗೆ ಹೋದ ಸಲೀಂ ಅಲಿ ಸುತ್ತಾಡಿದ್ದೆಲ್ಲಾಭರ್ಮಾದ ಕಾಡುಗಳಲ್ಲಿ ಹಕ್ಕಿಗಳ ಚಿಲಿಪಿಲಿ ಗಾನ ಕೇಳುತ್ತಾ ಅವುಗಳ ಬಣ್ಣ,ಹಾರಾಟ ನೋಡುತ್ತಾ ಸಮಯ

ಭರ್ಮಾದಿಂದ ಹಿಂತಿರುಗಿದ ಬಳಿಕ ಸಲೀಂ ಅಲಿ ಪ್ರಾಣಿಶಾಸ್ತ್ರವನ್ನಬ್ಯಸಿಸಿ ಬಾಂಬೆ ನ್ಯಾಚುರಲ್ ಹಿಸ್ತರಿ ಸೊಸೈಟಿಯಲ್ಲಿ ಗೈಡ್ ಆಗಿ ಕೆಲಸಕ್ಕೆ ಸೇರಿದರು. ಹೆಚ್ಚಿನ ತರಬೇತಿ ಪಡೆಯಲು ಜರ್ಮನಿಗೆ ಹೋಗಿ ಬಂದರು. ಆದರೆ ಭಾರತಕ್ಕೆ ಮರಳಿದಾಗ ಅವರು ಇದ್ದ ಕೆಲಸ ಕೈ ಬಿಟ್ಟು ಹೋಗಿತ್ತು.ಅವರಿಗೆ ಹೆಂಡತಿಯ ಸಂಪಾದನೆಯೇ ಜೀವನಾಧಾರವಾಗಿತ್ತು.

ಮೊದಲಿನಿಂದಲೂ ಪಕ್ಷಿಗಳ ಬಗ್ಗೆ ಅರಿವು ಮೂಡಿಸಿಕೊಂಡಿದ್ದ ಅಲಿಯವರಿಗೆ ಗೀಜಗ್ ಹಕ್ಕಿಯ ಬಗ್ಗೆ ಅದ್ಯಯನ ನಡೆಸಿ ವಿಶ್ವದಾದ್ಯಂತ ಹೆಸರಾದರು. ವಿವಿಧ ಪಕ್ಷಿಗಳ ಕುರಿತು ಪುಸ್ತಕಗಳನ್ನು ಸಲೀಂ ಅಲಿ ರಚಿಸಿದ್ದಾರೆ. ಅವರ ದ ಬುಕ್ ಆಫ್ ಇಂಡಿಯನ್ ಬರ್ಡ್ಸ್ ಒಂದು ವಿಶಿಷ್ಟ ಗ್ರಂಥ ಈ ಪುಸ್ತಕದಲ್ಲಿ ಪಕ್ಷಿಗಳ ವಿವಿಧ ಜಾತಿ ವರ್ಗಗಳನ್ನು ಹೆಸರಿಸಿ ಆ ವರ್ಗದ ಪಕ್ಷಿಗಳ ಚಿತ್ರಗಳನ್ನು ಕೊಟ್ಟಿದ್ದಾರೆ. ಒಬ್ಬ ಸಾಮಾನ್ಯನು ಈ ಚಿತ್ರಗಳನ್ನು ನೋಡಿ ಬಗೆಬಗೆಯ ಪಕ್ಷಿಗಳನ್ನು ಗುರುತಿಸಲು ಸಾದ್ಯ.


೧೯೪೮ ರಲ್ಲಿ ಅಲಿ ಅಂತರಾಷ್ತ್ರೀಯ ಮನ್ನಣೆ ಗಳಿಸಿದ ಮತ್ತೊಬ್ಬ ಪಕ್ಷಿ ವಿಜ್ನಾನಿ ಎಸ್.ದಿಲಾನಿ ರಿಪ್ಲೆಯವರೊಂದಿಗೆ ಸೇರಿಕೊಡು ಹತ್ತು ಸಂಪುಟಗಳಲ್ಲಿ ಹ್ಯಾಂಡ್ ಬುಕ್ ಆಫ್ ದ ಬರ್ಡ್ಸ್ ಆಫ್ ಇಂಡಿಯಾ ಆಂಡ್ ಪಾಕಿಸ್ತಾನ ಎಂಬ ವಿಶಿಷ್ಟ ಗ್ರಂಥವನ್ನು ಹೊರತಂದರು. ಸಲೀಂ ಅಲಿ ತಮ್ಮ ಇಳಿ ವಯಸ್ಸಿನಲ್ಲೆ ಪಕ್ಷಿಗಳಿಗಾಗಿ ಹಂಬಲಿಸುತ್ತಿದ್ದ ಪರಿ ಎಂಥವರನ್ನು ಬೆರಗುಗೊಳಿಸುತ್ತಿತ್ತು. ಅಲಿಯವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದವು.
ಭಾರತ ಸರಕಾರ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಆರಿಸಿ ಗೌರವಿಸಿತ್ತು ತಾವು ಪಕ್ಷಿಗಳ ಮಡಿಲಿನಲ್ಲಿ ಕಳೆದ ಜೀವನದ ಕಥೆಯನ್ನು ಅಲಿಯವರು ಫಾಲ್ ಆಫ್ ಎ ಸ್ಯಾರೋ ಎಂಬ ರಾಷ್ಟ್ರಕಥೆ ಬರೆದಿದ್ದಾರೆ. ಸಲೀಂ ಅಲಿಯವರು ೧೯೮೭ ಜೂನ್ ೨೦ ರಂದು ಮುಂಬೈಯಲ್ಲಿ ನಿಧನರಾದರು.
ಪಕ್ಷಿಲೋಕದ ಅದ್ಬುತ ಇಂಚರವೊಂದು ಹಾಡಿ ಅಸ್ತಮಿಸಿದಂತಾಯಿತು.

Sunday, November 8, 2009

ವಿಶ್ವದ ಅತ್ಯಂತ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್


ಜಗತ್ತಿನ ಅತ್ಯಂತ ಚಿಕ್ಕ ಪಕ್ಷಿ ಎಂಬ ಹೆಗ್ಗಳಿಕೆ ಹಮ್ಮಿಂಗ್ ಪಕ್ಷಿಯದ್ದು ಗಾತ್ರದಲ್ಲಿ ಅತಿ ಚಿಕ್ಕದಾದರೂ ಇದಕ್ಕೆ ಇದರದೇ ಆದ ಹಲವು ವಿಶೇಷಗಳಿವೆ. ಅಂಗರಚನೆ ಟ್ರೋಕಿಲಿಡಾ ಎಂಬ ಪಕ್ಷಿ ಜಾತಿಗೆ ಸೇರಿರುವ ಇದರ ಗಾತ್ರ ೫-೬ ಇಂಚುಗಳಷ್ಟು ಈ ಪಕ್ಷಿಯನ್ನು ನಾವು ಬರೆಯುವ ಪೆನ್ಸಿಲಿನ ತುದಿಯ ಮೇಲೆ ನಿಲ್ಲಿಸಬಹುದು ಎಂದರೆ ಎಷ್ಟು ಚಿಕ್ಕ ಗಾತ್ರದ ಪಕ್ಷಿಯಾಗಿರಬಹುದು ನೀವೇ ಊಹಿಸಿ ಈ ಪುಟಾಣಿ ಪಕ್ಷಿ ವೇಗ ಇದೆಯಲ್ಲ ಅದು ನಮ್ಮ ಉಹೆಗೂ ನಿಲುಕದು.ಅಷ್ಟೊಂದು ವೇಗದಲ್ಲಿ ಹಾರಾಡುತ್ತದೆ ನೀವು ಒಮ್ಮೆ ಕಣ್ಣು ರೆಪ್ಪೆ ಪಿಳಿಕಿಸುವದರಲ್ಲಿ ಅದು ೨೫ ಬಾರಿ ತನ್ನ ರೆಕ್ಕೆಯನ್ನು ಬಡಿದುಕೊಂಡಿರುತ್ತದೆ .ಪ್ರತಿ ಸೆಕೆಂಡಿಗೆ ೯೦-೧೨೦ ಸಾರಿ ತನ್ನ ರೆಕ್ಕೆಯನ್ನು ಬಡೆದುಕೊಳ್ಳುತ್ತದೆ. ಗಂಟೆಗೆ ಸುಮಾರು ೧೫ ಕಿ.ಮಿ ವೇಗದಲ್ಲಿ ಹಾರಬಲ್ಲದು ಈ ಪಕ್ಷಿ ಸುಮಾರು ೩-೪ ವರ್ಷ ಬದುಕಬಲ್ಲದು ಈ ಪೈಕಿ ಕೆಲವು ೧೦-೧೨ ವರ್ಷ ಬದುಕಿ ದಾಖಲೆ ನಿರ್ಮಿಸಿವೆ ಎನ್ನುತ್ತಾರೆ ಪಕ್ಷಿ ಶಾಸ್ತ್ರಜ್ಞರು


ಸಾಮಾನ್ಯವಾಗಿ ಪೊದೆಗಳಲ್ಲಿ ಗೂಡುಕಟ್ಟುವ ಇದು ಒಮ್ಮೆಗೆ೩-೪ ಮೊಟ್ಟೆಗಳನ್ನು ಇಡುತ್ತದೆ .ಮೂತ್ತೆ ಒಡೆದು ಮರಿಯಗಳು ತೆಗೆದುಕೊಳ್ಳುವ ಸಮಯ ೨೦-೩೦ ದಿನಗಳು ಈ ಪಕ್ಷಿ ನಿಂತಲ್ಲೇ ನೇರವಾಗಿ ಮೇಲಕ್ಕೆ ವೃತ್ತಾಕಾರವಾಗಿ ಹಾರುವ ಸಾಮರ್ಥ್ಯ ಹೊಂದಿದೆ ಪಕ್ಷಿ ಜಗತ್ತಿನ ಅತ್ಯಂತ ಕೌತುಕಮಯವಾದ ಹಮ್ಮಿಂಗ್ ನಲ್ಲಿ ೨೦೦ ಬಗೆಯ ಉಪಪ್ರಬೇದಗಳಿವೆ ಈ ಪಕ್ಷಿಯನ್ನು ಗುರುತಿಸುವದು ಬಲು ಸುಲಭ ಹೆಣ್ಣು ಹಮ್ಮಿಂಗ್ ಕಂದು ಬಣ್ಣದಲ್ಲಿದ್ದು ಮುಖ ಬಿಳಿ ಬಂನದ್ದಿರುತ್ತದೆ


Friday, June 19, 2009

ಬಾಲ್ಯದ ಆ ದಿನಗಳು

ನಾನು ೫ ನೇ ತರಗತಿಯಿಂದ ಇಲ್ಲಿಯವರೆಗೊ ಕಳೆದ ಆ ದಿನಗಳನ್ನು ನೆನಪಿಸಿಕೊಂಡಾಗ ಸ್ವಲ್ಪ ಖುಷಿ ಸ್ವಲ್ಪ ದುಃಖ ಕಾರಣ ಆ ದಿನಗಳು ನನ್ನಲ್ಲಿ ಮರುಕಳಿಸಿದವು ಚಿಕ್ಕವನಿದ್ದಾಗ ಎಲ್ಲರು ಜೊತೆ ಆಡಿದ ಆ ಆಟಗಳು ಮತ್ತು ಅಜ್ಜಿಯ ಹೊಲಕ್ಕೆ ಹೋಗಿ ಕುರಿ ಹೊಡಕೊಂಡು ಅವುಗಳನ್ನು ಮೆಯಿಸುತ್ತಾ ಗುಡ್ಡ ತಿರುಗಾಡಿ ತ್ತೆ ಸಾಯಂಕಾಲದ ಹೊತ್ತಿಗೆ ಹಿಂದುರಿಗಿ ಬರುತ್ತಿದ್ದೆವು ಏನೋ ಕುರಿ ಮೇಯಿಸುವದೆಂದರೆ ಎಲ್ಲಿಲ್ಲದ ಖುಷಿ .



ಹಾಗೆಯೇ ಶಾಲೆ ಪ್ರಾರಂಭವಾಯಿತು ಆಗ ಮಳೆಗಾಲ ಜೋರಾಗಿ ಬಿಸುತ್ತಿದ್ದ ಮಳೆ -ಗಾಳಿಯ ಸಮಯಕ್ಕೆ ಸರಿಯಾಗಿ ಶಾಲೆ ಬಿಟ್ಟ ವೇಳೆ ೫ ಗಂಟೆ ಅಂದು ಶಾಲೆಯಿಂದ ಮಳೆಯಲ್ಲಿ ನೆನೆದುಕೊಂಡು ಓಡೋಡಿ ಬರುವಾಗ ರಸ್ತೆಯಲ್ಲಿ ಮಳೆಯ ರಭಸಕ್ಕೆ ಒಂದು ಸಣ್ಣ ನಿಲಗರಿಯ ಸಸಿ ಬೇರು ಸಹಿತ ಅನಾಥವಾಗಿ ಬಿದ್ದಿತ್ತು ಅದನ್ನು ಕಂಡು ಅಯ್ಯೋ ಜೀವವೇ ಎಂದು ಮನಸ್ಸಿನಲ್ಲೇ ಮರುಗಿದೆ ಅದನ್ನು ಮೇಲೆತ್ತಿಕೊಂಡು ಮನೆಗೆ ತರಬೇಕು ಇನ್ನೇನು ಮನೆ ತಲುಪಿದೆ ಎನ್ನುವ ಸಮಯದಲ್ಲಿ ಅಂಗಳದಲ್ಲಿ ಬಿದ್ದಿದ್ದ ಒಂದು ಮುಳ್ಳು ಕಾಲಿಗೆ ನೆಟ್ಟಾಗ ರಕ್ತ ಸೋರುತ್ತಿತ್ತು ಅದಕ್ಕೆ ಅವ್ವ ಅರಿಸಿಣಪುಡಿ ಹಾಕಿ ಅದಕ್ಕೆ ಅರಿಬೆಯನ್ನು ಕಟ್ಟಿ ರಕ್ತ ನಿಲ್ಲುವ ಹಾಗೆ ಮಾಡಿದಳು ನನಗೆ ಮುಳ್ಳು ಚುಚ್ಚಿದ ನೋವಿಗಿಂತ ನನಗೆ ಸಿಕ್ಕಿರುವ ಆ ಸಸಿಯನ್ನು ಎಲ್ಲಿ ಹಚ್ಚಬೇಕು ಎನ್ನುವ ಚಿಂತೆ ನನ್ನನ್ನು ಕಾಡುತ್ತಿತ್ತು ಅಂತು-ಇಂತು ಮನೆಯ ಹಿತ್ತಲಿನಲ್ಲಿ ಅದನ್ನು ಬೆಳಸಿದೆ ಅದು ಈಗ ಬೆಳೆದು ನನಗಿಂತ ತುಂಬಾ ದೊಡ್ಡದಾಗಿದೆ ನಾನು ಮಾತ್ರ ಹಾಗೆ ಇದ್ದೀನಿ.ಅದನ್ನು ನೋಡಿದಾಗಲ್ಲೆಲ್ಲಾ ಆ ಮಳೆ ಆ ಮುಳ್ಳು ಮತ್ತು ನನ್ನ ಮನಸ್ಸಿನ ಮೇಲೆ ಪ್ರಭಾವ ಬಿರಿದ ಆ ನೀಲಗಿರಿ ಮರದ ಸವಿನೆನಪು ನನ್ನಲ್ಲಿ ಮರುಕಳಿಸುತ್ತದೆ .

Thursday, June 18, 2009

ಡಾ.ಬಿ.ಆರ್ ಅಂಬೇಡ್ಕರ್

ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಏಪ್ರಿಲ್ ೧೪ ರಂದು ದೇಶಾದ್ಯಂತ ಆಚರಿಸುತ್ತೇವೆ. ಈ ದಿನ ಸರಕಾರಿ ರಜೆಯನ್ನು ಘೋಷಣೆಮಾಡಿದೆ. ಆದರೆ ಈ ದಿನ ರಜೆಯನ್ನು ಕೊಡುವುದನ್ನು ಬಿಟ್ಟು ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವಮಾನದ ಸಾಧನೆಯನ್ನು, ಅವರ ಕೀರ್ತಿಯನ್ನು ಸಾರಿಹೇಳುವುದು ಹಾಗೂ ಅಳವಡಿಸಿಕೊಳ್ಳ್ವುವುದು ಅವಶ್ಯಕವಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ದಿನದಂದು ಅಂಬೇಡ್ಕರ್ ಅವರ ಜೀವನದ ಕುರಿತು ವಿಚಾರ ಸಂಕಿರ್ಣಗಳನ್ನು ಹಮ್ಮಿಕೊಳ್ಳಬೇಕು. ಅಥವಾ ಅವರ ಜೀವನ ಕುರಿತಾದ ಮೌಲ್ಯಗಳನ್ನು ನಾಟಕದ ಮೂಲಕ ಜನಸಾಮಾನ್ಯರಿಗೆ ತಿಳಿಸುವುದು ಅಗತ್ಯ. ಡಾ.ಬಿ.ಆರ್ ಅಂಬೇಡ್ಕರ್ ಅವರು ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡಿದವರು. ಅವರು ಅಲ್ಪಸಂಖ್ಯಾತರ ಏಳಿಗೆಗೆ ಪ್ರಮುಖ ಪತ್ರ ವಹಿಸಿದವರು. ಅಂಬೇಡ್ಕರ್ ಅವರು ಪ್ರಖ್ಯಾತ ಪತ್ರಕರ್ತರಲ್ಲದೇ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿದ್ದರು. ಇಂತಹ ಮಹಾನ್ ವ್ಯಕ್ತಿಯ ದಿನಾಚರಣೆ ಮಾಡುವುದನ್ನು ಜನಸಾಮಾನ್ಯರಿಗೆ ತಿಳಿಸುವುಸು ಮುಖ್ಯ. ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ದಿನದಂದು ಅಂಬೇಡ್ಕರ್ ಅವರ ಜೀವನದ ಕುರಿತು ವಿಚಾರ ಸಂಕಿರ್ಣಗಳನ್ನು ಹಮ್ಮಿಕೊಳ್ಳಬೇಕು. ಅಥವಾ ಅವರ ಜೀವನ ಕುರಿತಾದ ಮೌಲ್ಯಗಳ್ನ್ನು ನಾಟಕದ ಮೂಲಕ ಜನಸಾಮಾನ್ಯರಿಗೆ ತಿಲಿಸುವುದು. ಅವರ ಜೀವನದ ಕುರಿತಾದ ಪ್ರಬಂಧಗಳ ಸ್ಪರ್ಧೆಯನ್ನು ಏರ್ಪಡಿಸುವುದು ಮತ್ತು ಅವರ ಜೀವನದ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವುದು ಅವಶ್ಯಕವಾಗಿದೆ.

Tuesday, June 16, 2009

ಹೆಚ್ಚುತ್ತಿರುವ ಬಾಲಕಾರ್ಮಿಕರ ಸಂಖ್ಯೆ


ಜೂನ್ ೧೨ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ಕೂಲಿ ಮಾಡುವದನ್ನು ಬಿಟ್ಟು ಶಾಲೆಗೆ ಕಳುಹಿಸಿ ಎಂಬ ಸರ್ಕಾರದ ಆದೇಶವನ್ನು ಯಾರು ಪಾಲಿಸುತ್ತಿಲ್ಲ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚುತ್ತಿದ್ದಾರೆ ಕಾರಣ ಹೆಣ್ಣು ಮಕ್ಕಳು ಕಲಿತಾದರು ಏನು ಮಾಡುವದಿದೆ ಮದುವೆ ಆಗಿ ಗಂಡನ ಮನೆ ಸೇರುತ್ತಾರೆ ಕಲಿಸಿಯಾದರು ಏನು ಮಾಡೋದು ಎಂಬ ಭಾವನೆ ಬಡ ತಂದೆ ತಾಯಿಯರದು .

ಅದೇ ಗಂಡು ಮಗನಿಗೆ ಶಾಲೆ ಕಲಿಸಿದರೆ ಅವನು ಕಲಿತು ನೌಕರಿ ತೆಗೆದುಕೊಂಡರೆ ನಮ್ಮನ್ನು ಸಾಕಬಹುದು ಎಂಬ ತಂದೆ ತಾಯಿಯರ ಆಸೆಯಾಗಿರುತ್ತದೆ .ಇತ್ತಿಚಿನ ದಿನಗಳಲ್ಲಿ ಬಡ ಹೆಣ್ಣುಮಕ್ಕಳು ಅವರಿವರ ಮನೆಯಲ್ಲಿ ಬಟ್ಟೆ ಒಗೆಯುವದು, ಮುಸುರಿ ತಿಕ್ಕುವದು ಹೀಗೆ ಅನೇಕ ತರಹದ ಕೆಲಸಗಳನ್ನು ಮಾಡುತ್ತಿದ್ದಾರೆ ಕೊನೆಗೆ ಗೊಂಡಿ ಕೆಲಸಕ್ಕೂ ಹೋಗುತ್ತಾರೆ.
ಆದರೆ ಹುಡುಗರನ್ನು ಮಾತ್ರ ಶಾಲೆಗೆ ಕಳುಹಿಸುತ್ತಾರೆ ಅದರಲ್ಲೂ ಸ್ವಲ್ಪ ಗಂಡು ಮಕ್ಕಳು ಕೂಡಾ ಹೋಟೆಲ್,ಚಿತ್ರಮಂದಿರ,ಬಟ್ಟೆ ಅಂಗಡಿ ಹೀಗೆ ಅನೇಕ ಕಡೆ ದುಡಿಯುತ್ತಾರೆ ಇದರಿಂದ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ.ಇದನ್ನು ತಡೆಗಟ್ಟಲು ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಅವರು ಕಲಿತು ಅವರ ಮಕ್ಕಳನ್ನು ಕಲಿಸುತ್ತಾರೆ ಇದರಿಂದ ಬಡತನವನ್ನು ನಿರ್ಮೂಲನೆ ಮತ್ತು ಬಾಲಕಾರ್ಮಿಕರಾಗುವದನ್ನು ತಪ್ಪಿಸಬಹುದು.

Monday, June 15, 2009

ರಕ್ತಧಾನ ಮಹಾಧಾನ


ನೀವು ೧೮ -೬೦ ವರ್ಷದವರೇ,ಆರೋಗ್ಯವಂತರೆ ಹಾಗಿದ್ದರೆ ಬನ್ನಿ ಜೂನ್ ೧೪ ರಂದು ವಿಶ್ವ ರಕ್ತಧಾನ ಶಿಬಿರವನ್ನು ಆಚರಿಸಲಾಗುತ್ತದೆ ನೀವು ರಕ್ತಧಾನ ಮಾಡಿ ದಾನಿಗಳಾಗಿ ನೀವು ರಕ್ತ ನೀಡಬೇಕಾದರೆ ೧೮-೬೦ ವರ್ಷದವರಾಗಿರಬೇಕು,ನಿಮ್ಮ ದೇಹದ ತೂಕ ೪೫ ಕೆ.ಜಿ ಗಿಂತ ಹೆಚ್ಚಿರಬೇಕು ಮತ್ತು ಹಿಮೊಗ್ಲೋಬಿನ್ ಅಂಶ ೧೨.೫ ಗ್ರಾಂ ಗಿಂತ ಹೆಚ್ಚಿರಬೇಕು ಈ ಎಲ್ಲ ಅಂಶಗಳು ನಿಮ್ಮಲ್ಲಿದ್ದರೆ ೩ ತಿಂಗಳಿಗೊಮ್ಮೆ ರಕ್ತಧಾನ ಮಾಡಬಹುದು.
ನೀವು ರಕ್ತಧಾನ ಮಾಡುವದರಿಂದ ನಿಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ.ಆಸ್ಪತ್ರೆಯಲ್ಲಿ ರೋಗಿಗಳು ರಕ್ತದ ಕೊರತೆಯಿಂದ ಬಳಲುತ್ತಿರುತ್ತಾರೆ ಅಂತವರಿಗೆ ರಕ್ತದಾನ ಮಾಡುವದರಿಂದ ಅವರಿಗೆ ಜೀವಧಾನ ಮಾಡಿದಂತಾಗುತ್ತದೆ ಇದರಿಂದ ನಿಮಗೆ ಯಾವುದೇ ಸಂದರ್ಬದಲ್ಲಿ ರಕ್ತ ಬೇಕಾದರೆ ತಕ್ಷಣ ದೊರೆಯುತ್ತದೆ .ಹಾಗಿದ್ದರೆ ಬನ್ನಿ ರಕ್ತಧಾನ ಮಾಡೋಣ

Friday, June 12, 2009

ರಾಜುರಿನ ಸುಣ್ಣದ ಬಟ್ಟೆಯವರ ಕಥೆ-ವ್ಯತೆ.

ಗಜೇಂದ್ರಗಡದಿಂದ ಕೇವಲ ೪ ಕೀ.ಮಿ ದೂರವಿರುವ ಪುಟ್ಟ ಗ್ರಾಮ ರಾಜುರು ಇಲ್ಲಿನ ಜನರ ಉದ್ಯೋಗ ಸುಣ್ಣ ತಯಾರು ಮಾಡುವದು ಇವರು ಇದನ್ನೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇವರು ರಾಜುರಿನಲ್ಲಿ ಸುಣ್ಣ ತಯಾರು ಮಾಡಿ ಸಮೀಪದ ಪಟ್ಟಣವಾದ ಗಜೇಂದ್ರಗಡಕ್ಕೆ ಬಂದು ಮಾರಾಟ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.

ಇವರು ಸುಣ್ಣವನ್ನು ಸುಟ್ಟ ಕಟ್ಟಿಗೆಯ ಇದ್ದಿಲುಗಳಿಂದ ತಯಾರು ಮಾಡುತ್ತಾರೆ ಇವರು ಸುಣ್ಣ ಮಾರಾಟಕ್ಕೆಂದು ಸಮೀಪದ ಉರುಗಳಿಗೆ ತೆರಳಿದಾಗ ಅವರು ಸುಣ್ಣವನ್ನು ಕೊಟ್ಟು ಅವರಿಂದ ದುಡ್ಡು ಪಡೆಯುವ ಬದಲಾಗಿ ಸುಟ್ಟ ಕಟ್ಟಿಗೆಯ ಇದ್ದಿಲುಗಳನ್ನು ಪಡೆಯುತ್ತಾರೆ ಕಾರಣ ಅವರು ಒಂದು ಪುಟ್ಟಿ ಸುಣ್ಣದ ಇದ್ದಿಲುಗಳನ್ನು ಕೊಂಡರೆ ೪೮ ರೂಪಾಯಿಗಳು. ಅದೇ ಸುಣ್ಣ ನೀಡಿ ದುಡ್ಡಿನ ಬದಲಾಗಿ ಇದ್ದಿಲುಗಳನ್ನು ಪಡೆಯುತ್ತಾರೆ ಇದರಿಂದ ಇವರಿಗೆ ಅಲ್ಪ ಸ್ವಲ್ಪ ಹಣ ಉಳಿಯುತ್ತದೆ ಎಂಬುದು ಇವರ ಅಭಿಪ್ರಾಯ.

ಗಜೇಂದ್ರಗಡ ಪಟ್ಟಣ ಪ್ರದೇಶವಾದ್ದರಿಂದ ಇತ್ತಿಚಿಗೆ ಸುಣ್ಣದ ಮನೆಗಳು ಕಣ್ಮರೆಯಾಗುತ್ತಿವೆ ಇದರಿಂದ ಅವರಿಗೆ ಸುಣ್ಣವನ್ನು ಮಾರಾಟ ಮಾಡುವದು ಕಷ್ಟಕರವಾಗುತ್ತಿದೆ ಅಂತಹದರಲ್ಲಿ ಅಲ್ಲೋಂದಿಷ್ಟು ಇಲ್ಲೋಂದಿಷ್ಟು ಮನೆಗಳು ಸುಣ್ಣವನ್ನು ಮನೆಗೆ ಹಚ್ಚುತ್ತಿದ್ದರು ಹಬ್ಬ-ಹರಿದಿನಗಳಲ್ಲಿ ಮಾತ್ರ ಮನೆಗೆ ಸುಣ್ಣ ಹಚ್ಚಿ ಅಲಂಕಾರ ಮಾಡುವ ಸಂಪ್ರದಾಯವನ್ನು ಕಂಡುಕೋಂಡಿದ್ದಾರೆ ಹಾಗಾದರೆ ರಾಜುರಿನಲ್ಲಿ ಸುಣ್ಣದ ಬಟ್ಟಿಯನ್ನೆ ನಂಬಿ ಜೀವನ ಸಾಗಿಸುತ್ತಿರುವ ಎಷ್ಟೂ ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ.

Thursday, June 11, 2009

ನನ್ನ ಸ್ನೇಹ ಮಧುರ


ಮನಸ್ಸು ಬಂಗಾರ.

ಕನಸು ಶ್ರುಂಗಾರ.

ಜೀವನ ಒಂದು ತರಾ .

ಆದರೆ ಪ್ರೀತಿ ಸುಮಧುರಾ.

ಸ್ನೇಹ ಮಧುರಾ

ನೆನಪಿನ ಚಿತ್ತಾರ.

ಕಲ್ಪನೆಯ ಕಣ್ಣಲ್ಲಿ ಕನಸುಗಳ ದನಿಯಲ್ಲಿ

ಸಾಗಲಿ ಬದುಕಿನ ಪಯಣ

ಕನಸುಗಳು ನನಸಾಗಲಿ

ಬದುಕೆಲ್ಲಾ ಬೆಳಕಾಗಿ ಉದಯಿಸಲಿ

ಬಾಳಿನ ಆಶಾ ಕಿರಣ .

Wednesday, June 10, 2009

ಏಳು ಬೆಟ್ಟಗಳ ಸಂಗಮ ಗಜೇಂದ್ರಗಡ ಬೆಟ್ಟ






ಗದಗ ಜಿಲ್ಲೆಯಿಂದ ೫೬ ಕಿ.ಮೀ ದೂರವಿರುವ ಗಜೇಂದ್ರಗಡ ಛತ್ರಪತಿ ಮಹಾರಾಜರು ಆಳಿದ ಇತಿಹಾಸವನ್ನು ಹೊಂದಿದೆ ಇಲ್ಲಿ ಕೋಟೆ ಮತ್ತು ಹೊಂಡಗಳ ನಿರ್ಮಾಣವನ್ನು ಇಂದಿಗೂ ಇಲ್ಲಿ ಕಾಣಸಿಗುತ್ತವೆ.ಇವರು ತಾವು ನೀರು ಕುಡಿಯಲು ಒಂದು ಹೊಂಡವನ್ನು ಉಪಯೋಗಿಸಿದರೆ,ಇನ್ನೊಂದು ಹೊಂಡವನ್ನು ಹಾಲು ಮತ್ತು ಮೊಸರಿಗೆ ಇನ್ನೊಂದು ಹೊಂಡ,ಮತ್ತು ಹಸುಗಳಿಗೆ ನೀರು ಕುಡಿಸಲು ಇನ್ನೊಂದು ಹೊಂಡ ಹೀಗೆ ಅವರ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸುತ್ತಿದ್ದರು.
ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಆಳ್ವಿಕೆ ನೆಡೆಸುವಾಗ ಶತ್ರುಗಳನ್ನು ಸೆದೆಬಡೆಯಲು ಮದ್ದುಗಳನ್ನು ಬಳಸುತ್ತಿದ್ದರು ಮದ್ದು ಇರಿಸುತ್ತಿದ್ದ ಕೋಣೆ ಇಂದಿಗೂ ಕಾಣಸಿಗುತ್ತದೆ. ಹಾಗೇ ಹಿಂದಿನ ಕಾಲದಲ್ಲಿ ಆನೆ,ಬಸವಣ್ಣನ ಮುರ್ತಿಗಳನ್ನು ಗಚ್ಚಿನಲ್ಲಿ ನಿರ್ಮಾಣ ಮಾಡಿ ಹೊಂಡದ ದಡದ ಮೇಲೆ ಅವುಗಳನ್ನು ನಿರ್ಮಿಸಿದ್ದಾರೆ.




ಮೊದಲಿಗೆ ಬೆಟ್ಟದ ಮೇಲೆ ತೆರಳಲು ರಾಜರು ನಿರ್ಮಿಸಿದ ಮೆಟ್ಟಿಲುಗಳಿಂದ ಮೇಲೆ ಹೋಗಬೇಕಾಗಿತ್ತು ಆದರೆ ಈಗ ಬೆಟ್ಟದ ಮೇಲೆ ೪೮ ಗಾಳಿ ವಿದ್ಯುತ್ ಯಂತ್ರಗಳನ್ನು ನಿರ್ಮಾಣ ಮಾಡಿರುವದರಿಂದ ಯಂತ್ರಗಳನ್ನು ತಂದ ಮಾರ್ಗದಲ್ಲೆ ಈಗ ಬೆಟ್ಟದ ಮೇಲೆ ವಾಹನಗಳ ಮೂಲಕ ತೆರಳುತ್ತಾರೆ.ಬೆಟ್ಟದ ಮೇಲೆ ಹತ್ತಿದ ನಂತರ ತಂಪಾದ ಗಾಳಿಯ ವಾತಾವರಣ ನೋಡಬಹುದಾದ ರಾಜರ ಕಾಲದ ಕೋಟೆ,ಕಲ್ಲಿನ ತೊಟ್ಟಿಲು,ಮದ್ದಿನಕೋಣೆ,ಹೊಂಡಗಳು ಮತ್ತು ಅಕ್ಕ ತಂಗಿ ಕೂಡಿ ಎರಡು ಕಲ್ಲುಗಳ ಮೇಲೆ ಒಂದು ಬೃಹತ್ತಾದ ದೊಡ್ಡ ಕಲ್ಲನ್ನೆ ಎತ್ತಿ ಇಟ್ಟಿದ್ದಾರೆ ಎಂಬ ಪ್ರತೀತಿ ಇದೆ.



ಮಳೆಗಾಲ ಬಂತೆಂದರೆ ಸಾಕು ಬೆಟ್ಟದಿಂದ ದುಮುಕುವ ಜಲಪಾತಗಳನ್ನು ವೀಕ್ಷಿಸಬಹುದು ಬೆಟ್ಟದಿಂದ ನೀರು ರಭಸವಾಗಿ ಹರಿದು ಬರುವದರಿಂದ ಬೆಟ್ಟದ ಕೆಳಗೆ ಮಣ್ಣಿನಿಂದ ಕೂಡಿದ ದಿಬ್ಬಗಳು ಇರುವದರಿಂದ ಆ ನೀರಿನ ರಬಸಕ್ಕೆ ಕಣಿವೆಗಳಾಗಿ ಮಾರ್ಪಟ್ಟಿವೆ ಇಲ್ಲಿ ಸದಾ ನೀರು ಇರುವದರಿಂದ ಹಚ್ಚ ಹಸಿರಾದ ಪ್ರಕೃತಿಯನ್ನು ಕಾಣಬಹುದಾಗಿದೆ.



ಬೆಟ್ಟದ ಮೇಲಿಂದ ಸುತ್ತಲೂ ವಿಕ್ಷಿಸಿದರೆ ಕಾಣುವ ಸುಂದರ ನಯನ ಮನೋಹರವಾದ ಬೆಟ್ಟಗಳ ಸಾಲು ಮತ್ತು ಬೆಟ್ಟದ ಮಡಿಲಿನಲ್ಲಿ ಸುತ್ತಲು ಕಾಣುವ ಹಚ್ಚ ಹಸಿರಾಗಿ ಕಾಣುವ ಪ್ರಕೃತಿ ತಂಪಾದ ಗಾಳಿ ಮತ್ತು ಬೋರ್ಗರೆದು ಹರಿಯುವ ನೀರಿನ ಸಪ್ಪಳ ಎಲ್ಲವನ್ನು ನೋಡಿದರೆ ಒಂದು ಕ್ಷಣ ನಮ್ಮನ್ನೇ ನಾವು ಮರೆತುಬಿಡುತ್ತೇವೆ ಹಾಗಿದ್ದರೆ ನೀವು ಬನ್ನಿ ಪ್ರಕೃತಿಯ ಸೌಂದರ್ಯಕ್ಕೆ ಮೈ ಮರೆಯುವದು ಕಂಡಿತ

Tuesday, June 9, 2009

ಪ್ರೀತಿ v|s ಕುರುಡು ಜಗತ್ತು

ಪ್ರೀತಿ ದೂರಾಯ್ತು ಹೃದಯದಿಂದಲ್ಲ ನೆನಪು ಉಸಿರಾಯ್ತು ಕನಸಿನಂದಲ್ಲ ಜೀವ ಜೀವ ಒಂದೇ ದೇಹದಿ ಬಾಳ ಬದುಕು ಬಾರವಾಗಿದೆ ನಿನ್ನ ಅಗಲಿ ನರಳುತಿದೆ ಗೆಳೆಯ ಈ ಮನ.
ಎಷ್ಟೋ ದಿನ ಸಂತೋಷ ಇನ್ನೇಷ್ಟೂ ದಿನ ಭಯದ ನೆರಳು ಕೆಲವು ದಿನ ಕಳವಳ ಬಹಳ ದಿನ ನೋವು ಜೀವನದುದ್ದಕ್ಕೂನಿನ್ನ ನೆನಪಿನ ಯಾತನೆ ಕೊನೆಯಿಲ್ಲಗೆಳೆಯ ಈ ದೇಹ ಮಣ್ಣಲ್ಲಿ ಮಣ್ಣಾದರು ಸರಿ.

ಜಗತ್ತು ಅರಿಯದೆ ಪ್ರೀತಿ ಮಾಡಿದೆವು ಕನಸು ಕಲ್ಪನೆಗಳು ಗಗನದುದ್ದಕ್ಕೂ ಹೋಗಿ ಆಶಾ ಗೋಪುರವಾದವು ಜೋಡಿ ಮನಸ್ಸುಗಳ ಕಲ್ಪನೆ ಒಂದಾದರೆ ಕುರುಡು ಜಗತ್ತು ಬಗೆಯುವ ದ್ರೋಹ ಇನ್ನೊಂದಾಯಿತು ಗೆಳೆಯ.

ನಿನ್ನ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬ ನನ್ನ ಹೃದಯದಲ್ಲಿ ನಿನ್ನ ಪ್ರೀತಿಯ ಬಿಂಬ ಕೊನೆಗೂ ದೈವ ಬಗೆಯುತೊಂದು ದ್ರೋಹ ನಮ್ಮಿಬ್ಬರ ಪ್ರೀತಿಯ ಸಮಾದಿಯ ಮೇಲೆಆ ವಿಧಿ ತನ್ನ ಸೌಧ ಕಟ್ಟುವ ಬಯಕೆ ಇದೆ
ಇದು ಸರಿಯೆ ಕೊನೆಗೊಂದು ಮಾತು ನಮ್ಮಿಬ್ಬರ ಪ್ರೀತಿಯ ಸೋಲಿಗೆ ಕಾರಣವಾದ ಈ ಕುರುಡು ಜಗತ್ತಿಗೆ ನಮ್ಮಿಬ್ಬರ ದಿಕ್ಕಾರವಿದೆ.ನೆನಪಿಟ್ಟುಕೊಳ್ಳಿ

ಚುರುಮರಿಯಲ್ಲೆ ಚೂರಾದವರು


ಅವರ ಇಡೀ ಬದುಕು ಚುರುಮರಿ ಭಟ್ಟಿಯಲ್ಲೆ ಕಳಿದಿದೆ ಹೊಗೆ ಹಾಗೂ ದೂಳಿನ ಜೊತೆಗೆ ನಿತ್ಯ ಚುರುಮರಿ ಮಾಡುತ್ತಾ ಕಪ್ಪಾಗಿದ್ದಾರೆ ಇದು ಗಜೆಂದ್ರಗಡದಲ್ಲಿ ಚುರುಮರಿ ಭಟ್ಟಿಯನ್ನೆ ಅವಲಂಬಿಸಿ ಜೀವನ ಸಾಗಿಸುತ್ತಿರುವವರ ಪರಿ ಅವರ ಈ ಕೆಲಸ ವಂಶಪರಂಪರಿಯಿಂದ ಬಂದಿದ್ದು ಈಗ ದುಡಿಯುತ್ತಿರುವದು ೪೮ ರ ಆಸುಪಾಸಿನವರು
ಇತ್ತಿಚಿಗೆ ಇವರಿಗೆ ಮಕ್ಕಳನ್ನು ಶಾಲೆಗೆ ಕಳಿಸಬೇಕು ಅವರು ನಮ್ಮಂತಾಗಬಾರದು ಎಂದು ಶಾಲೆಗೆ ಕಳುಹಿಸುತ್ತಿದ್ದಾರೆ.ಆದರೆ ಬಡತನದಿಂದಾಗಿ ಇವರಲ್ಲಿ ಕಲಿತವರು ಕಡಿಮೆ ಕೆಲವರು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು ಹೆಚ್ಚಿನ ಜನರು ಈ ಭಟ್ಟಿಗಳ ಮೇಲೆಯೇ ಅವಲಂಬಿತರಾಗಿದ್ದಾರೆ.
ಇವರಿಗೆ ಹಬ್ಬ ಹರಿದಿನಗಳು ಮತ್ತು ಮದುವೆ ಸಿಜನ್ ಬತೆಂದರೆ ಚುರುಮರಿಗೆ ಎಲ್ಲಿಲ್ಲದ ಬೇಡಿಕೆ ಇವರು ಇದೇ ವೇಳೆಯಲ್ಲಿ ಮಾತ್ರ ಸರಿಯಾಗಿ ದುಡಿದು ಸಂಕಷ್ಟದಲ್ಲಿದ್ದಾಗ ಆ ದುಡ್ಡನ್ನು ಉಪಯೋಗಿಸಿಕೊಂಡು ಜೇವನ ಸಾಗಿಸುತ್ತಾರೆ ಇವರಿಗೆ ವಾರದಲ್ಲಿ ೩-೪ ದಿನಗಳು ಮಾತ್ರ ಕೆಲಸ ಮಾಡಿ ಉಳಿದ ದಿನಗಳಲ್ಲಿ ಸುಮ್ಮನೆ ಕಾಲ ಕಳೆಯುತ್ತಾರೆ ಬೇರೆ ಕಡೆ ಕೆಲಸ ಮಾಡಬೇಕೆಂದರೆ ಇವರಿಗೆ ಬೇರೆ ಉದ್ಯೋಗದ ಬಗ್ಗೆ ಅರಿವಿಲ್ಲ ಇವರು ಚುರುಮರಿ ಮಾಡುವದರಲ್ಲೆ ಮಾರು ಹೋಗಿದ್ದಾರೆ.
ಇವರಿಗೆ ಒಂದು ದಿನ ಕೆಲಸ ಮಾಡಿದರೆ ಸಿಗುವದು ಬರಿ ೫೦-೬೦ ರೂಪಾಯಿಗಳು ಮಾತ್ರ ಎಂದು ಗೋಳಾಡುತ್ತಾರೆ ಮುಂಜಾನೆ ೪ಘಂಟೆಯಿಂದ ಸಂಜೆ ೬ ರವರೆಗೆ ದುಡಿಯುತ್ತಾರೆ ಗಿರಿಣಿಗೆ ಒಯ್ದು ಅಕ್ಕಿ ಮಾಡಿಸಿದ ಮೇಲೆ ಅವುಗಳನ್ನು ಬಿಸಿಲಲ್ಲಿ ಒಣಗಿಸುತ್ತಾರೆ.ಕರೆಂಟ್ ಸೌಲಬ್ಯ ಸರಿಯಾಗಿದ್ದರೆ ದಿನಕ್ಕೆ ೨ ಕ್ವಿಂಟಲ್ ಭತ್ತದಿಂದ ಚುರುಮರಿ ತಯಾರಿಸುತ್ತಾರೆ ೧ ಕ್ವಿಂಟಲ್ ಭತ್ತದಿಂದ ೮-೯ ಚೀಲ ಚುರುಮರಿ ಸಿದ್ದಗೊಳಿಸುತ್ತಾರೆ.
ಒಂದು ಕ್ವಿಂಟಲ್ ಅವಲಕ್ಕಿಗೆ ೧೪೦೦ ಕೊಟ್ಟು ತಂದರೆ ಒಂದು ಚೀಲ ಚುರುಮರಿಗೆ ೨೨೫ ದರದಂತೆ ಮಾರುತ್ತಾರೆ ಒಂದು ಬಟ್ಟಿಯಲ್ಲಿ ೪-೬ ಜನರು ದುಡಿಯುತ್ತಾರೆ ಆದರೆ ದಿನದ ಕೂಲಿ ೭೦ರೂ ಹೆಚ್ಚಿಗೆ ಪಡೆಯಲು ಸಾದ್ಯವಾಗುತ್ತಿಲ್ಲ ಎನ್ನುತ್ತಾರೆ ಗಿರಣಿ ಮಾಲಿಕರಾದ ಪರಮೇಶಪ್ಪ ಚನ್ನಿಯವರು.

Friday, June 5, 2009

ಬೀದಿಯಲ್ಲೆ ಬೆಳೆವ ಬಾಲ್ಯ

ಓದುವ ಬಾಲ್ಯದಲ್ಲಿ ದಿಕ್ಕೆಟ್ಟು ಓಡುತ್ತಿರುವ ಈ ಮಕ್ಕಳು ಹುಬ್ಬಳ್ಳಿಯವರು ಕೂತುಂಡರೆ ಕೂಳು ಹಾಕುವವರಾರು? ಎಂದು ಹೆತ್ತ ತಾಯಂದಿರೆ ಇಲ್ಲಿ ತಮ್ಮ ಮಕ್ಕಳನ್ನು ಬಿಕ್ಷಾಟನೆಗೆ ಹಚ್ಚಿದ್ದಾರೆ
ಪುಸ್ತಕ ಹಿಡಿದುಕೊಂಡು ಶಾಲೆಗೆ ಹೋಗುವ ಮಕ್ಕಳ ಕೈಯಲ್ಲಿ ಬಿಕ್ಷೆ ಬೇಡುವ ಜೋಳಿಗೆಗಳು ದಿನ ಬೆಳಗಾದ್ರೆ ಸಾಕು ಕೊರೆಯುವ ಚಳಿಯಲ್ಲೂ ಅವರು ಆರೆಂದ್ರೆ ಆರು ಗಂಟೆಗೆ ಎದ್ದು ಚೀಲ ಹಿಡಿದು ಪರೇಡ ಹೊರಡುತ್ತಾರೆ ಎಲ್ಲರೂ ಸೇರಿಕೂಂಡು ಹೊರಟರು ಸ್ವಲ್ಪ ಸಮಯದಲ್ಲೆ ಅವರೆಲ್ಲರು ಮಿಂಚಿನಂತೆ ಮಾಯವಾಗುತ್ತಾರೆ.
ಬಸ್ ನಿಲ್ದಾಣ, ರೈಲು ನಿಲ್ದಾಣ,ಸಿನಿಮಾ,ಪಾರ್ಕ್,ಹೋಟೆಲ್ ಹೀಗೆ ಎಲ್ಲೆಂದರಲ್ಲಿ ಗಸ್ತು ತಿರುಗುವ ಈ ಮಕ್ಕಳು ಅಮ್ಮಾ ಎಂದು ಬಿಕ್ಷೆ ಬೇಡುತ್ತಿರುವಾಗ ಅವಳ ತಾಯಿ ಇನ್ನಾವುದು ಸ್ಟಳದಲ್ಲಿ ಅಮ್ಮಾ ಎಂದು ಬಿಕ್ಷೆ ಬೇಡುತ್ತಿರುತ್ತಾಳೆ.ಈ ಮಕ್ಕಳನ್ನು ನೋಡಿ ನೀವು ಚಿಲ್ಲರೆ ಕಾಸು ಹಾಕಿದರೆ ಸರಿ ಇಲ್ಲವಾದರೆ ಅವರು ನಿಮ್ಮ ಕಾಲನ್ನೆ ಹಿಡಿದುಕೂಳ್ಳುತ್ತಾರೆ ಬಿಡುವದೇ ಇಲ್ಲ.
ಅಷ್ಟಕ್ಕೂ ಈ ಮಕ್ಕಳಿಗೆ ಈ ಕಸಬು ಅನಿವಾರ್ಯವೆ ಎಂದು ಯೋಚಿಸಿದಾಗ ಹೌದು ಅನಿವಾರ್ಯ ಇದಕ್ಕೆ ಕಾರಣ ಬಡತನ ಒಪ್ಪತ್ತಿನ ಅನ್ನಕ್ಕಾಗಿ ಯಾರಾರಿಗೊ ಅಮ್ಮಾ,ತಾಯಿ ಎಂದು ಕೂಗಿದರು ಇವರ ಕೂಗನ್ನು ಕೇಳಿ ಎಷ್ಟು ಜನ ತಾನೆ ಭೀಕ್ಷೆ ನಿಡ್ಯಾರು ಅವ್ರಿಗೆ ಗೊತ್ತು .
ಒಂದು ದಿನ ನಾನು ಫ್ಲ್ಯೆಓವರನಲ್ಲಿ ಹೊಗುವಾಗ ಒಂದು ಹುಡುಗ ಒಬ್ಬ ತಾಯಿಗೆ ಅಮ್ಮಾ ಎಂದು ಭಿಕ್ಷೆ ಕೇಳಿದ ಅದಕ್ಕೆ ಆ ತಾಯಿ ಅವನಿಗೆ ದಿನ ಬೆಳಗಾದರೆ ಏನ್ ಕಾಟನಪ್ಪ ನಿಮದು ಎಂದು ಹೊರಟುಹೊದಳು ನನಗೆ ಅಯ್ಯೋ ಪಾಪ ಅನಿಸಿತು ಆದರೆ ಆ ಹುಡಗನಿಗೆ ಅವನ ಜೀವನದಲ್ಲಿ ಇಂತಹ ಘಟನೆಗಳು ದಿನಬೆಳಗಾದರೆ ಎಷ್ಟು ನಡೆಯುತ್ತವೆಯೋ ಏನೋ ಯಾರು ಬಲ್ಲರು
ಈ ಮಕ್ಕಳ್ಳನ್ನು ಶಾಲೆಗೆ ಕಳುಹಿಸಿದರೆ ಮದ್ಯಾಹ್ನದ ಬಿಸಿಉಟ ಶಾಲೆಯಲ್ಲಿಯೇ ಆಗುತ್ತದೆ ನಿಜ ಆದರೆ ಮನೆಯವರ ಪರಸ್ಠಿತಿ? ಮಕ್ಕಳ ಮುಖ ನೋಡಿ ಯಾರಾದರು ಬಿಕ್ಷೆ ನಿಡುತ್ತಾರೆ ಅವರೇ ಶಾಲೆಗೆ ಹೋದರೆ ಮನೆಗೆ ತಂದು ಹಾಕುವರಾರು ಅದಕ್ಕೆಂದೆ ಅವರು ೬-೭ ಮಕ್ಕಳನ್ನು ಹೆರುತ್ತಾರೆ ಆದರೆ ಇಂತಹ ಮಕ್ಕಳನ್ನು ನೋಡಿ ಕೆಲವರು ಶಾಲೆಗೆ ಯಾಕೆ ಹೊಗಲ್ಲ ಎಂದು ಕೇಳಿದರೆ ಸಾಕು ಇವರ ಓಟ ಶುರುವಾಗುತ್ತೆ. ಅವರು ಯಾರ ಕೈಗೂ ಸಿಗುವದಿಲ್ಲ ಅಷ್ಟೊಂದು ಓಡುತ್ತಾರೆ ಹಾಗಾದರೆ ಇವರ ಮುಂದಿನ ಗತಿ ಏನು?

Friday, May 29, 2009

ಜಡೆಯಲ್ಲಿ ಜಿನುಗುವ ಗಂಗೆ


ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಶಿವನ ಮುಡಿಯಿಂದ ಈ ಧರೆಗೆ ಬಂದ ಕಥೆ ತಮಗೆ ತಿಳಿದಿದೆ. ಆ ಗಂಗೆಯ ಅವತರಣದಂತೆ ಗಜೇಂದ್ರಗಡ ಸಮೀಪದ ಶ್ರೀ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಸದಾ ಜಿನುಗುವ ನೀರು ನನ್ನಲ್ಲಿ ವಿಶೇಷ ಜಿಜ್ಞಾಸೆ ಮೂಡಿಸಿದೆ.

ಕಾಲಕಾಲೇಶ್ವರ ಗ್ರಾಮದ ತಪ್ಪಲಿನಲ್ಲಿರುವ ಕಾಲಕಾಲೇಶ್ವರ ಬೆಟ್ಟದಲ್ಲಿ ಶ್ರೀ ಕಾಲಕಾಲೇಶ್ವರನ ಸನ್ನಿಧಾನವಿದೆ. ಇಲ್ಲಿ ಶಿವನ ಜಡೆಗಳು ಜೋತು ಬಿದ್ದಂತೆ ಆಲ ಮತ್ತು ಅರಳೆ ಬೇರುಗಳಿಂದ ಗಂಗೆಯ ಅವತರಣವಾದಂತೆ ನೀರು ಜಿನುಗುತ್ತದೆ. ಈ ಬೇರುಗಳ ಮುಖಾಂತರ ಬೀಳುತ್ತಿರುವ ನೀರನ್ನು ನೋಡಿದಾಗ ಸಾಕ್ಷಾತ್ ಗಂಗೆಯೇ ಶಿವನ ಜಡೆಯಿಂದ ಉಕ್ಕಿ ಹರಿಯುತ್ತಿರುವಂತೆ ಭಾಸವಾಗುತ್ತದೆ. ಈ ಹಸಿರು ಸೊಬಗಿನ ಬೆಟ್ಟಕ್ಕೆ ಭೇಟಿ ನೀಡುವ ಆಸ್ತಿಕರಿಗೆ ವಿಶೇಷ ಅನುಭವ ನೀಡುತ್ತದೆ. ಮೇಲ್ಭಾಗದ ಪಡಿಯಿಂದ ಬೀಳುವ ತುಂತುರು ನೀರ ಹನಿಗಳು ನೋಡುಗರ ಮುಖಕ್ಕೆ ಮುತ್ತಿಟ್ಟು ಮಾಯವಾಗುತ್ತವೆ.ನಿಸರ್ಗ ಪ್ರೇಮಿಗಳಿಗೆ ಸ್ವರ್ಗ ಸುಖ ನೀಡುವ ಮನೋರಂಜನೀಯವಾದ ಈ ಗಂಗೆ ಗುಪ್ತಗಾಕಾಲಕಾಲೇಶ್ವರ ಕ್ಷೇತ್ರದ ಹಿರಿಮೆಗೆ ತನ್ನ ಕೊಡುಗೆ ನೀಡುತ್ತಿದ್ದಾಳೆ. ಬೆಟ್ಟದ ಮೇಲೆ ಕೆರೆ ಭಾವಿಗಳೇನೂ ಇಲ್ಲ. ಆದರೂ ವರ್ಷದ ೧೨ ತಿಂಗಳೂ ಸದಾ ಬೆಟ್ಟದ ಮೇಲಿಂದ ನೀರು ಜಿನುಗುತ್ತಲೇ ಇರುತ್ತದೆ. ಈ ನೀರು ಎಲ್ಲಿಂದ ಬರುತ್ತದೆಯೋ ಅದು ಜಿಜ್ಞಾಸೆಯ ವಿಷಯ. ಮಳೆಗಾಲದಲ್ಲಿ ಈ ನೀರು ರಭಸವಾಗಿ ಬೀಳುತ್ತದೆ. ಬೇಸಿಗೆಯಲ್ಲಿ ಈ ಜಲಧಾರೆ ತುಂತುರು ನೀರ ಹನಿಗಳಾಗಿ ಪರಿವರ್ತಿತಗೊಳ್ಳುತ್ತವೆ. ಈ ಸೃಷ್ಟಿ ಸೊಬಗಿನ ನಾಡಿನಲ್ಲಿ ಈ ಗಂಗೆ ಸಣ್ಣ ಜಲಪಾತದಂತೆ ಮನ ಸೆಳೆಯುತ್ತಾಳೆ. ಬೆಟ್ಟದ ಶಿಖರದಲ್ಲಿ ಪಾರಿವಾಳಗಳ ಸಂಕುಲ ಸಹ ಈ ಸೊಬಗನ್ನು ಇಮ್ಮಡಿಸುವಂತೆ ಮಾಡಿದೆ.

ಶ್ರೀ ಕಾಲಕಾಲೇಶ್ವರ ದೇವಸ್ಥಾನದ ಪೂಜಾರಿ ಮಲ್ಲಯ್ಯಸ್ವಾಮಿ ಅವರು ಹೇಳುವಂತೆ, ದೇವಸ್ಥಾನದ ಎಡ ಭಾಗದಲ್ಲಿ ೭ ಗವಿಗಳಿದ್ದು, ಆ ಗವಿಗಳಲ್ಲಿ ೭ ಹೊಂಡಗಳಿವೆ. ಆ ಎಲ್ಲ ಹೊಂಡಗಳ ತುಂಬ ನೀರು ೧೨ ತಿಂಗಳುಗಳ ಕಾಲ ತುಂಬಿರುತ್ತದೆ. ಮೊದಲ ಹೊಂಡ ಹೊರತು ಪಡಿಸಿ ಉಳಿದ ೬ ಹೊಂಡಗಳನ್ನು ಒಳಹೊಕ್ಕು ನೋಡಲು ಸಾಧ್ಯವಿಲ್ಲ. ಕಳಕೇಶ ಚಿಲಝರಿ ಅವರು ಅಭಿಪ್ರಾಯ ಪಡುವಂತೆ, ದೇವಸ್ಥಾನದ ಕೆಳಗಿಳಿದು ಬಂದರೆ ೫ ಹೊಂಡಗಳು ಕಾಣಸಿಗುತ್ತವೆ. ಈ ೫ ಹೊಂಡಗಳು ವರ್ಷದ ೧೨ ತಿಂಗಳುಗಳ ಕಾಲ ತುಂಬಿ ಹರಿಯುವ ಹೊಂಡಗಳು.

ಸಾಮಾನ್ಯವಾಗಿ ಗ್ರಾಮ ಎಂದರೆ ಸಾಕು. ಅಲ್ಲಿನ ನೀರಿನ ಬವಣೆಯನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕಾಲಕಾಲೇಶ್ವರ ಗ್ರಾಮ ಬರ ಕಾಣದ ಗ್ರಾಮ. ಇಲ್ಲಿ ಗಂಗಾಧರ ಹಳ್ಳ ಮತ್ತು ಕಣಿವೆ ಹಳ್ಳಗಳು ಮೈದುಂಬಿ ಹರಿಯುತ್ತವೆ. ಹಾಗೆಯೇ ಈ ೫ ಹೊಂಡಗಳು ಇರುವುದರಿಂದ ಒಂದು ಹೊಂಡ ದೇವರ ಪೂಜೆಗೆ ಮೀಸಲಿದ್ದರೆ, ೨ನೇ ಹೊಂಡದ ನೀರು ಕುಡಿಯಲು, ೩ನೇ ಹೊಂಡದ ನೀರು ಸ್ನಾನ ಮಾಡಲು, ೪ನೇ ಹೊಂಡದ ನೀರು ಬಟ್ಟೆ ತೊಳೆಯಲು ಹೀಗೆ ಪ್ರತ್ಯೇಕವಾಗಿ ಭಕ್ತಾದಿಗಳು ನೀರನ್ನು ಉಪಯೋಗಿಸುತ್ತಾರೆ. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಬೆಟ್ಟದಿಂದ ಧುಮುಕುವ ೨೦ಕ್ಕೂ ಹೆಚ್ಚು ನಯನ ಮನೋಹರ ಜಲಪಾತಗಳನ್ನು ನೋಡಿ ಆನಂದಿಸಬಹುದು.ಗಜೇಂದ್ರಗಡದ ಎಸ್.ಎಂ.ಭೂಮರೆಡ್ಡಿ ಕಾಲೇಜಿನಲ್ಲಿ ನಾವೆಲ್ಲ ಪದವಿ ವಿದ್ಯಾರ್ಥಿಗಳಾಗಿದ್ದ ಮೇಲಿಂದ ಮೇಲೆ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೆವು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಾಗಿ ಸಾಕಷ್ಟು ಬಾರಿ ಈ ಎಲ್ಲ ಹೊಂಡಗಳ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇವೆ. ಇತ್ತೀಚೆಗೆ ನಾನು ಭೇಟಿ ನೀಡಿದ್ದಾಗ ಹೊಂಡಗಳೆಲ್ಲ ಕಳೆಗುಂದಿ ಕೊಚ್ಚೆಯ ಗುಂಡಿಗಳಂತಾಗಿದ್ದವು. ಈ ಬಾರಿ ಸೂಟಿಯಲ್ಲಿ ಊರಿಗೆ ಹೋದಾಗ ಸಮಾನಮನಸ್ಕ ಗೆಳೆಯರೆಲ್ಲ ಜೊತೆಗೂಡಿ ಮತ್ತೆ ಅವುಗಳನ್ನು ಸ್ವಚ್ಛಗೊಳಿಸುವ ನಿರ್ಧಾರ ಮಾಡಿದ್ದೇವೆ.

ನೀವು ಈ ಕ್ಶೇತ್ರಕ್ಕೆ ಭೇಟಿ ನೀಡಬೇಕೆ? ಹುಬ್ಬಳ್ಳಿಯಿಂದ ೫೨ ಕಿ.ಮೀ ದೂರದಲ್ಲಿದೆ ಗದಗ. ಅಲ್ಲಿಂದ ಗಜೇಂದ್ರಗಡ ೫೬ ಕಿ.ಮೀ. ಇಲ್ಲಿಂದ ಕೇವಲ ೪ ಕಿ.ಮೀ ದೂರದಲ್ಲಿದೆ ಶ್ರೀ. ಕಾಲಕಾಲೇಶ್ವರ ದೇವಸ್ಥಾನ. ಇಲ್ಲಿಗೆ ಬಸ್, ಟ್ಯಾಕ್ಸಿ ಮತ್ತು ಆಟೊ, ಟಾಂಗಾಗಳ ಮೂಲಕ ತೆರಳಬಹುದು. ಇಲ್ಲಿ ಯಾವುದೇ ಹೊಟೆಲ್ ಅಥವಾ ಪ್ರವಾಸಿ ಮಂದಿರಗಳು ಇಲ್ಲದ ಕಾರಣ ಊಟದ ವ್ಯವಸ್ಥೆ ನಾವೇ ಮಾಡಿಕೊಳ್ಳಬೇಕು.

Tuesday, May 26, 2009

ನೀರು ಅಮೂಲ್ಯವಾದುದು ಮಿತವಾಗಿ ಬಳಸೋಣ

ಭೂಮಿ ಬೇಸಿಗೆಯ ಬಿಸಿಲಿಗೆ ಕಾದಿದೆ. ಮಳೆಯಿಲ್ಲದೇ ಭೂಮಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದೆ. ಭೂಮಿಗೆ ಜ್ವರ ಬರುವ ಸ್ಠಿತಿಯಲ್ಲಿದೆ! ಆದರೆ ನಾವು ಮಾತ್ರ ನೀರನ್ನು ಬೇಕಾಬಿಟ್ಟಿ ಬಳಸಿ ನೀರಿನ ಅಮೂಲ್ಯವಾದ ಪಾತ್ರವನ್ನೇ ಬರಿದು ಮಾಡುವ ಸ್ಥಿತಿಯಲ್ಲಿದ್ದೇವೆ. ಹೀಗಿದ್ದರೂ ದಿನಬೆಳಗಾದರೆ ಸಾಕು ಗ್ರಾಮಗಳಲ್ಲಿ ನಮ್ಮ ಜನರು ಕುಡಿಯಲು ನೀರಿಲ್ಲದ ಕಾರಣಕ್ಕಾಗಿ 5 ರಿಂದ 10 ಕಿ.ಮೀ. ವರೆಗೆ ಹೋಗಿ ಸೈಕಲ್.ಬಂಡಿ.ಕೊನೆಗೆ ಕಾಲುದಾರಿಯಲ್ಲಿ ನೀರನ್ನು ತರುವಂಥಹದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.

ಗ್ರಾಮಗಳಲ್ಲಿ ಬಾವಿ ಹಳ್ಳ-ಕೊಳ್ಳ,ಕಾಲುವೆ ಹೊಂಡಗಳು ನೀರಿಲ್ಲದೆಯೇ ಒಣಗುತ್ತಿವೆ.ಇನ್ನೊಂದೆಡೆ ಮಳೆಯಿಲ್ಲದೆ ಗಿಡ ಮರಗಳು ಒಣಗುತ್ತಿವೆ. ಕೃಷಿ ಭೂಮಿಯಲ್ಲಿ ನೀರಿಲ್ಲದೇ ವ್ಯವಸಾಯ ಮಾಡಲು ರೈತರಿಗೆ ಅತೀ ಕಷ್ಟದಾಯಕವಾಗಿದೆ. ಇಷ್ಟೆಲ್ಲಾ ಆದರೂ ನೀರನ್ನು ಯಾವ ರೀತಿ ದುರ್ಬಳಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ನೋಡಿ ಒಂದು ಉದಾಹರಣೆ.

ಗಜೇಂದ್ರಗಡ ಬೆಟ್ಟದ ಮೇಲೆ ಅನೇಕ ಸಿಹಿನೀರಿನ ಹೊಂಡಗಳಿವೆ. ಅವುಗಳಲ್ಲಿ ಅಕ್ಕ ತಂಗಿ,ಆಕಳ ಮತ್ತು ಮಂಗನ ಹೊಂಡಗಳೆಂದು ಕರೆಯುತ್ತಾರೆ. ಈ ಹೊಂಡಗಳ ನೀರನ್ನು ಇಲ್ಲಿನ ಲಂಬಾಣಿ ಜನಾಂಗದವರು ಸಾರಾಯಿ ತಯಾರಿಸಲು ಉಪಯೋಗಿಸುತ್ತಾರೆ. ಹೊಂಡದ ದಡದ ಮೇಲೆ ಹೆಂಡವನ್ನು ತಯಾರಿಸುತ್ತಿದ್ದಾರೆ.

ಸಾರಾಯಿ ತಯಾರಿಸಿದ ಅಶುದ್ಧ ನೀರು ಮತ್ತು ತಯಾರಿಸಿ ಬಿಟ್ಟುಹೊದ ಬೂದಿ,ಕಟ್ಟಿಗೆ ಪುಡಿ ಕೊಳೆತ ಇನ್ನಿತರ ವಸ್ತುಗಳ ಕಾಲುವೆ ಮುಖಾಂತರ ನೇರವಾಗಿ ಹರಿದು ಹೊಂಡವನ್ನು ಸೇರುವುದರಿಂದ ನೀರು ಪಾಚಿ ಕಟ್ಟಿದಂತೆ ಹಚ್ಚ ಹಸಿರಾಗಿ ಮಾರ್ಪಾಡುತವೆ. ಇದರಿಂದ ನೀರು ವಾಸನೆ ಬರುತ್ತಿರುತ್ತದೆ.ಆದರೆ ಮೂಕ ಪ್ರಾಣಿಗಳು ದಾಹವನ್ನು ತೀರಿಸಿಕೊಳ್ಳಲು ಸಾರಾಯಿ ತ್ಯಾಜ್ಯದಿಂದ ಅಶುದ್ಧಗೊಂಡ ನೀರನ್ನು ಕುಡಿದು ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿವೆ.
ಅದೇ ಮಳೆಗಾಲದಲ್ಲಿ ಹೊಂಡಗಳು ತುಂಬಿ ಜಲಪಾತದಂತೆ ನೀರು ಬೆಟ್ಟದಿಂದ ಧುಮುಕುತ್ತಿರುವ ದೃಶ್ಯ ರಮಣೀಯ. ಹೊಂಡಗಳ ನೀರು ಮಲಿನವಾಗುವುದು ಹೀಗೇ ಮುಂದುವರೆದರೆ ಈಗ ಪ್ರಾಣಿಗಳಿಗೆ ತಗಲುವ ರೋಗಗಳು ಮುಂದೆ ಮನುಷ್ಯರಿಗೂ ತಗಲುವ ಯಾವ ಸಂದೇಹವಿಲ್ಲ.

ತಿಪ್ಪಣ್ಣ ಅವಧೂತ

ಕ್ಯಾಂಪಸ್ ವಿಶೇಷ

ವಿದ್ಯಾಭಾರತಿ ಪ್ರತಿಷ್ಠಾನದ ಇನ್ ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್ ಆಂಡ್ ರಿಸರ್ಚ (ಐ.ಎಂ.ಸಿ.ಆರ್)
ಪತ್ರಿಕೋದ್ಯಮ ಮಹಾವಿದ್ಯಾಲಯವು ೨೦೦೯-೨೦೧೦ ನೇ ಸಾಲಿನ ಪರಿಚಯ ಪತ್ರ ತಯಾರಿಸಲು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಪ್ರಾಚಾರ್ಯೆರೊಂದಿಗೆ ಛಾಯಾಚಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

೨೦೦೪ ರಿಂದ ಐ.ಎಮ್.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯವು ಭಾವಿಪತ್ರಕರ್ತರನ್ನು ತರಬೇತಿಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ಮಹಾವಿದ್ಯಾಲಯ ಪತ್ರಿಕಾ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ ೨೦೦೭ ನೇ ಸಾಲಿನ ’ಚಾಣಕ್ಯ’ ಪ್ರಸಸ್ತಿ ಪಡೆಯುವಲ್ಲಿ ಯಸಸ್ವಿಯಾಗಿದೆ.
ಪ್ರಾಚಾರ್ಯೆ ಡಾ.ನಯನಾ ಗಂಗಾಧರ ಅವರು ವಿಭಾಗಕ್ಕೆ ಬೆನ್ನೆಲುಬಾಗಿದ್ದಾರೆ. ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕರುಗಳಾದ ವಿನಯಚಂದ್ರ ಮಹೀಂದ್ರಕರ್ ಹಾಗೂ ವಿದ್ಯಾಧಿಕಾರಿ ಪ್ರೊ. ಪಿ.ಎನ್.ಖಟಾವಕರ. ಅವರ ಪ್ರೋತ್ಸಾಹ ಮತ್ತು ಸಹಕಾರದ ಸಮ್ಮಿಲನವು ಪತ್ರಿಕೋದ್ಯಮ ವಿಭಾಗದ ಬೆಳವಣಿಗೆಗೆ ಪೂರಕವಾಗಿದೆ.

ಸಮ್ಯಕ್ ದರ್ಶನ

ಕುಮಾರಿ ಚೇತನಾ ಜೋಶಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ. ಇವರು ಐಬಿಎಂಆರ್ ನಲ್ಲಿ ಬಿಸಿಎ ದ್ವಿತೀಯ ಸೆಮಿಸ್ಟರ್ ನಲ್ಲಿ ಓದುತ್ತಿದ್ದಾರೆ.

೨೦೦೮-೨೦೦೯ ನೇ ಸಾಲಿನ ಮಹಾವಿದ್ಯಾಲಯ ವಿಭಾಗದಲ್ಲಿ ನಡೆದ ಜಮಖಾನದಲ್ಲಿ ಕೊಲ್ಯಾಜ್ ಹಾಗೂ ದೇಶಭಕ್ತಿ ಗೀತೆ ಸ್ಪರ್ದೆಯಲ್ಲಿ ಬಹುಮಾನ ಪಡೆದ ಈಕೆ,ಕಲಿಯಬೇಕೆಂಬ ಆಸಕ್ತಿ, ಸತತ ಪರಿಸ್ರಮವಿದ್ದರೆ ಕಲೆ ಒಲಿಯುತ್ತದೆ ಎನ್ನುತ್ತಾರೆ. ಈ ಬಗ್ಗೆ ಅವರನ್ನು ಮಾತನಾಡಿಸಿದಾಗ.........

ಸಂತೋಷ - ಮಹಾವಿದ್ಯಾಲಯದಲ್ಲಿ ಕೊಲ್ಯಾಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದಾಗ ನಿಮ್ಮ ಅನುಭವ ಹೇಗಿತ್ತು?
ಚೇತನಾ - ಕೊಲ್ಯಾಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಕಳೆದ ಮೂರು ವರ್ಷಗಳಿಂದ ಕೊಲ್ಯಾಜ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದೆನೆ.
ಸಂತೋಷ - ನಿಮ್ಮ ನೆಚ್ಚಿನ ಹವ್ಯಾಸಗಳೇನು?
ಚೇತನಾ - ಸಂಗೀತ, ಸಾಹಿತ್ಯ ಕಾದಂಬರಿಗಳನ್ನು ಓದುವದು ನನ್ನ ಅಚ್ಚುಮೆಚ್ಚಿನ ಹವ್ಯಾಸಗಳಾಗಿವೆ. ಮೂರು ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿದ್ದೇನೆ.
ಸಂತೋಷ - ನಿಮ್ಮ ಓದಿನ ನಡುವೆ ಹವ್ಯಾಸಕ್ಕೆ ಹೇಗೆ ಪ್ರಾಮುಖ್ಯತೆ ನೀಡುತ್ತೀರಿ?
ಚೇತನಾ- ಹವ್ಯಾಸಗಳೇನಿದ್ದರೂ ಓದಿನ ನಂತರ. ವಿದ್ಯಾಭ್ಯಾಸಕ್ಕೆ ನನ್ನ ಮೊದಲ ಆಧ್ಯತೆ ನಾನು ಚೆನ್ನಾಗಿ ಓದಿ ಉನ್ನತ ಸ್ಥಾನ ಪಡೆಯಬೇಕಿದೆ.
ಸಂತೋಷ - ನಿಮ್ಮ ಭವಿಷ್ಯದ ಗುರಿಯೇನು?
ಚೇತನಾ - ಸಾಫ್ಟ್ ವೇರ್ ತಂತ್ರಾಂಶ ವಿಭಾಗದಲ್ಲಿ ಉದ್ಯೋಗ ಪಡೆಯುವದು ಹಾಗೂ ಅದರಲ್ಲಿ ಯಶಸ್ಸು ಗಳಿಸುವುದು ನನ್ನ ಆಶೆ. ಅಲ್ಲದೇ ಸಾಹಿತ್ಯ ಕೃಷಿ ಮಾಡುವುದೂ ಸಹ ನನ್ನ ಕನಸಾಗಿದೆ.


ಮೊದಲ ಮತದಾನದ ಅನಿಸಿಕೆ


ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಚುನಾವಣೆಗೆ ಪ್ರಥಮ ಬಾರಿಗೆ ಮತ ಚಲಾಯಿಸುತ್ತಿರುವ ಐಬಿಎಮ್ ಆರ್ ನ ಬಿಸಿಎ ದ್ವಿತೀಯ ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಅನಿಸಿಕೆ ಹೀಗಿದೆ.
"ಮೊದಲ ಬಾರಿಗೆ ಮತ ಚಲಾಯಿಸುತ್ತಿರುವುದು ನನಗೆ ಖುಷಿ ಎನಿಸುತ್ತಿದೆ. ಏಕೆಂದರೆ ನಾಗರಿಕನೆಂದು ಪರಿಗಣಿತವಾಗಿ .ದೇಶದ ಆಡಳಿತ ವ್ಯವಸ್ಥೆಯಲ್ಲಿ ನಾನು ಭಾಗವಹಿಸುತ್ತಿದ್ದೆನೆ" ಎನ್ನುತ್ತಾರೆ ಐ.ಬಿ.ಎಂ.ಆರ್.ನಲ್ಲಿ ಬಿಸಿಎ ದ್ವಿತೀಯ ಸೆಮಿಸ್ಟರ್ ನಲ್ಲಿ ಓದುತ್ತಿರುವ ಅಮಿತ್.

’ಮೊದಲ ಬಾರಿಗೆ ಮತ ಚಲಾಯಿಸುತ್ತಿರುವುದು ನನಗೆ ಅಲ್ಪಮಟ್ಟಿಗೆ ಸಂತೋಷವೆನಿಸಿದರೂ ಈ ಬಗ್ಗೆ ಬೇಸರವೆಸಿಸುತ್ತಿದೆ. ಕಾರಣ ರಾಜಕಾರಣಿಗಳಲ್ಲಿ ಎದ್ದು ಕಾಣುವ ಭ್ರಸ್ಟತೆ. ಆದರೂ ಮತ ಚಲಾಯಿಸುವುದು ಹಾಗೂ ಸರಿಯಾದ ಅಭ್ಯರ್ಥಿಗಳನ್ನು ಆರಿಸಿ ತರುವ ಮೂಲಕ ದೇಶ ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ.ಜನರು ಸರಿಯಾದ ಅಭ್ಯರ್ಥಿಯನ್ನು ಆರಿಸಿ ತರುವ ಮೂಲಕ ದೇಶ ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ. ಜನರು ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಸದೃಢ ಸರಕಾರ ಜಾರಿಗೆ ತರಲು ಸಾಧ್ಯವಿದೆ" ಎನ್ನುತ್ತಾರೆ ವಿದ್ಯಾರ್ಥಿನಿ ಅಪೂರ್ವಾ ಮಳಗಿ.

ಜಾಲ ತಾಣ


www.drishtisrishti.blogspot.com
www.imcrvision.blogspot.com
ಹುಬ್ಬಳ್ಳಿಯ ವಿದ್ಯಾಭಾರತಿ ಪ್ರತಿಷ್ಠಾನದ ಇನ್ ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ ಆಂಡ್ ರಿಸರ್ಚ, ಪತ್ರಿಕೋದ್ಯಮ ಮಹಾವಿದ್ಯಾಲಯದ ವತಿಯಿಂದ ಪ್ರಾರಂಭಿಸಲಾದ ಸೃಜನಶೀಲ ಬ್ಲಾಗ್ ಇದಾಗಿದೆ.ವಿದ್ಯಾರ್ಥಿಗಳ ಕ್ರಿಯಾಶೀಲತೆ ಮತ್ತು ವೈಚಾರಿಕ ಪ್ರಜ್ಣೆಯನ್ನು ವೃದ್ಧಿಸುವುದೇ ಈ ಬ್ಲಾಗನ ಮುಖ್ಯ ಉದ್ದೇಶವಾಗಿದೆ.

ಪತ್ರಿಕೋದ್ಯಮ ವಿದ್ಯಾರ್ಥಿಗಳೇ ಬರೆಯುವ ಕನ್ನಡ ಹಾಗೂ ಇಂಗ್ಲೀಷನ್ ಲೇಖನ,ನುಡಿಚಿತ್ರ ಗಳು ಈ ಬ್ಲಾಗ್ ನಲ್ಲಿ ಕಾಣಸಿಗುತ್ತವೆ. ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ವೇದಿಕೆಯಾಗಿರುವ ಈ ಬ್ಲಾಗ್ ಅನೇಕ ಉತ್ತಮಾಂಶಗಳನ್ನು ಹೊಂದಿದೆ.
ಪ್ರಪಂಚದ ಯಾವುದೇ ಮೂಲೆಯಿಂದಲಾದರೂ ಈ ಬ್ಲಾಗಿಗೆ ನೀವು ಭೇಟಿ ನೀಡಬಹುದಾಗಿದೆ. ಈಗಾಗಲೇ ೧೭೭ ಓದುಗರು ಈ ಬ್ಲಾಗಿಗೆ ಭೇಟಿ ನೀಡಿದ್ದಾರೆ.ಅಲ್ಲದೇ ಓದುಗರು ಟೀಕೆ ಟಿಪ್ಪಣೆ ಅಭಿಪ್ರಾಯಗಳನ್ನು ಕಳುಹಿಸಬಹುದಾಗಿದೆ. ವಿದ್ಯಾರ್ಥಿಗಳೇ ಬರೆಯುವ ಬರಹಗಳಾಗಿದ್ದರಿಂದ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತ, ಒಮ್ಮೆ ಓದಿದ ಪ್ರತಿಕ್ರಿಯೆ ಮಿಂಚಂಚೆ ಸಮೇತ ರವಾನಿಸಿ.