Tuesday, June 9, 2009

ಚುರುಮರಿಯಲ್ಲೆ ಚೂರಾದವರು


ಅವರ ಇಡೀ ಬದುಕು ಚುರುಮರಿ ಭಟ್ಟಿಯಲ್ಲೆ ಕಳಿದಿದೆ ಹೊಗೆ ಹಾಗೂ ದೂಳಿನ ಜೊತೆಗೆ ನಿತ್ಯ ಚುರುಮರಿ ಮಾಡುತ್ತಾ ಕಪ್ಪಾಗಿದ್ದಾರೆ ಇದು ಗಜೆಂದ್ರಗಡದಲ್ಲಿ ಚುರುಮರಿ ಭಟ್ಟಿಯನ್ನೆ ಅವಲಂಬಿಸಿ ಜೀವನ ಸಾಗಿಸುತ್ತಿರುವವರ ಪರಿ ಅವರ ಈ ಕೆಲಸ ವಂಶಪರಂಪರಿಯಿಂದ ಬಂದಿದ್ದು ಈಗ ದುಡಿಯುತ್ತಿರುವದು ೪೮ ರ ಆಸುಪಾಸಿನವರು
ಇತ್ತಿಚಿಗೆ ಇವರಿಗೆ ಮಕ್ಕಳನ್ನು ಶಾಲೆಗೆ ಕಳಿಸಬೇಕು ಅವರು ನಮ್ಮಂತಾಗಬಾರದು ಎಂದು ಶಾಲೆಗೆ ಕಳುಹಿಸುತ್ತಿದ್ದಾರೆ.ಆದರೆ ಬಡತನದಿಂದಾಗಿ ಇವರಲ್ಲಿ ಕಲಿತವರು ಕಡಿಮೆ ಕೆಲವರು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು ಹೆಚ್ಚಿನ ಜನರು ಈ ಭಟ್ಟಿಗಳ ಮೇಲೆಯೇ ಅವಲಂಬಿತರಾಗಿದ್ದಾರೆ.
ಇವರಿಗೆ ಹಬ್ಬ ಹರಿದಿನಗಳು ಮತ್ತು ಮದುವೆ ಸಿಜನ್ ಬತೆಂದರೆ ಚುರುಮರಿಗೆ ಎಲ್ಲಿಲ್ಲದ ಬೇಡಿಕೆ ಇವರು ಇದೇ ವೇಳೆಯಲ್ಲಿ ಮಾತ್ರ ಸರಿಯಾಗಿ ದುಡಿದು ಸಂಕಷ್ಟದಲ್ಲಿದ್ದಾಗ ಆ ದುಡ್ಡನ್ನು ಉಪಯೋಗಿಸಿಕೊಂಡು ಜೇವನ ಸಾಗಿಸುತ್ತಾರೆ ಇವರಿಗೆ ವಾರದಲ್ಲಿ ೩-೪ ದಿನಗಳು ಮಾತ್ರ ಕೆಲಸ ಮಾಡಿ ಉಳಿದ ದಿನಗಳಲ್ಲಿ ಸುಮ್ಮನೆ ಕಾಲ ಕಳೆಯುತ್ತಾರೆ ಬೇರೆ ಕಡೆ ಕೆಲಸ ಮಾಡಬೇಕೆಂದರೆ ಇವರಿಗೆ ಬೇರೆ ಉದ್ಯೋಗದ ಬಗ್ಗೆ ಅರಿವಿಲ್ಲ ಇವರು ಚುರುಮರಿ ಮಾಡುವದರಲ್ಲೆ ಮಾರು ಹೋಗಿದ್ದಾರೆ.
ಇವರಿಗೆ ಒಂದು ದಿನ ಕೆಲಸ ಮಾಡಿದರೆ ಸಿಗುವದು ಬರಿ ೫೦-೬೦ ರೂಪಾಯಿಗಳು ಮಾತ್ರ ಎಂದು ಗೋಳಾಡುತ್ತಾರೆ ಮುಂಜಾನೆ ೪ಘಂಟೆಯಿಂದ ಸಂಜೆ ೬ ರವರೆಗೆ ದುಡಿಯುತ್ತಾರೆ ಗಿರಿಣಿಗೆ ಒಯ್ದು ಅಕ್ಕಿ ಮಾಡಿಸಿದ ಮೇಲೆ ಅವುಗಳನ್ನು ಬಿಸಿಲಲ್ಲಿ ಒಣಗಿಸುತ್ತಾರೆ.ಕರೆಂಟ್ ಸೌಲಬ್ಯ ಸರಿಯಾಗಿದ್ದರೆ ದಿನಕ್ಕೆ ೨ ಕ್ವಿಂಟಲ್ ಭತ್ತದಿಂದ ಚುರುಮರಿ ತಯಾರಿಸುತ್ತಾರೆ ೧ ಕ್ವಿಂಟಲ್ ಭತ್ತದಿಂದ ೮-೯ ಚೀಲ ಚುರುಮರಿ ಸಿದ್ದಗೊಳಿಸುತ್ತಾರೆ.
ಒಂದು ಕ್ವಿಂಟಲ್ ಅವಲಕ್ಕಿಗೆ ೧೪೦೦ ಕೊಟ್ಟು ತಂದರೆ ಒಂದು ಚೀಲ ಚುರುಮರಿಗೆ ೨೨೫ ದರದಂತೆ ಮಾರುತ್ತಾರೆ ಒಂದು ಬಟ್ಟಿಯಲ್ಲಿ ೪-೬ ಜನರು ದುಡಿಯುತ್ತಾರೆ ಆದರೆ ದಿನದ ಕೂಲಿ ೭೦ರೂ ಹೆಚ್ಚಿಗೆ ಪಡೆಯಲು ಸಾದ್ಯವಾಗುತ್ತಿಲ್ಲ ಎನ್ನುತ್ತಾರೆ ಗಿರಣಿ ಮಾಲಿಕರಾದ ಪರಮೇಶಪ್ಪ ಚನ್ನಿಯವರು.

No comments:

Post a Comment