
ಹಾಗೆಯೇ ಶಾಲೆ ಪ್ರಾರಂಭವಾಯಿತು ಆಗ ಮಳೆಗಾಲ ಜೋರಾಗಿ ಬಿಸುತ್ತಿದ್ದ ಮಳೆ -ಗಾಳಿಯ ಸಮಯಕ್ಕೆ ಸರಿಯಾಗಿ ಶಾಲೆ ಬಿಟ್ಟ ವೇಳೆ ೫ ಗಂಟೆ ಅಂದು ಶಾಲೆಯಿಂದ ಮಳೆಯಲ್ಲಿ ನೆನೆದುಕೊಂಡು ಓಡೋಡಿ ಬರುವಾಗ ರಸ್ತೆಯಲ್ಲಿ ಮಳೆಯ ರಭಸಕ್ಕೆ ಒಂದು ಸಣ್ಣ ನಿಲಗರಿಯ ಸಸಿ ಬೇರು ಸಹಿತ ಅನಾಥವಾಗಿ ಬಿದ್ದಿತ್ತು ಅದನ್ನು ಕಂಡು ಅಯ್ಯೋ ಜೀವವೇ ಎಂದು ಮನಸ್ಸಿನಲ್ಲೇ ಮರುಗಿದೆ ಅದನ್ನು ಮೇಲೆತ್ತಿಕೊಂಡು ಮನೆಗೆ ತರಬೇಕು ಇನ್ನೇನು ಮನೆ ತಲುಪಿದೆ ಎನ್ನುವ ಸಮಯದಲ್ಲಿ ಅಂಗಳದಲ್ಲಿ ಬಿದ್ದಿದ್ದ ಒಂದು ಮುಳ್ಳು ಕಾಲಿಗೆ ನೆಟ್ಟಾಗ ರಕ್ತ ಸೋರುತ್ತಿತ್ತು ಅದಕ್ಕೆ ಅವ್ವ ಅರಿಸಿಣಪುಡಿ ಹಾಕಿ ಅದಕ್ಕೆ ಅರಿಬೆಯನ್ನು ಕಟ್ಟಿ ರಕ್ತ ನಿಲ್ಲುವ ಹಾಗೆ ಮಾಡಿದಳು ನನಗೆ ಮುಳ್ಳು ಚುಚ್ಚಿದ ನೋವಿಗಿಂತ ನನಗೆ ಸಿಕ್ಕಿರುವ ಆ ಸಸಿಯನ್ನು ಎಲ್ಲಿ ಹಚ್ಚಬೇಕು ಎನ್ನುವ ಚಿಂತೆ ನನ್ನನ್ನು ಕಾಡುತ್ತಿತ್ತು ಅಂತು-ಇಂತು ಮನೆಯ ಹಿತ್ತಲಿನಲ್ಲಿ ಅದನ್ನು ಬೆಳಸಿದೆ ಅದು ಈಗ ಬೆಳೆದು ನನಗಿಂತ ತುಂಬಾ ದೊಡ್ಡದಾಗಿದೆ ನಾನು ಮಾತ್ರ ಹಾಗೆ ಇದ್ದೀನಿ.ಅದನ್ನು ನೋಡಿದಾಗಲ್ಲೆಲ್ಲಾ ಆ ಮಳೆ ಆ ಮುಳ್ಳು ಮತ್ತು ನನ್ನ ಮನಸ್ಸಿನ ಮೇಲೆ ಪ್ರಭಾವ ಬಿರಿದ ಆ ನೀಲಗಿರಿ ಮರದ ಸವಿನೆನಪು ನನ್ನಲ್ಲಿ ಮರುಕಳಿಸುತ್ತದೆ .
No comments:
Post a Comment