Friday, June 5, 2009

ಬೀದಿಯಲ್ಲೆ ಬೆಳೆವ ಬಾಲ್ಯ

ಓದುವ ಬಾಲ್ಯದಲ್ಲಿ ದಿಕ್ಕೆಟ್ಟು ಓಡುತ್ತಿರುವ ಈ ಮಕ್ಕಳು ಹುಬ್ಬಳ್ಳಿಯವರು ಕೂತುಂಡರೆ ಕೂಳು ಹಾಕುವವರಾರು? ಎಂದು ಹೆತ್ತ ತಾಯಂದಿರೆ ಇಲ್ಲಿ ತಮ್ಮ ಮಕ್ಕಳನ್ನು ಬಿಕ್ಷಾಟನೆಗೆ ಹಚ್ಚಿದ್ದಾರೆ
ಪುಸ್ತಕ ಹಿಡಿದುಕೊಂಡು ಶಾಲೆಗೆ ಹೋಗುವ ಮಕ್ಕಳ ಕೈಯಲ್ಲಿ ಬಿಕ್ಷೆ ಬೇಡುವ ಜೋಳಿಗೆಗಳು ದಿನ ಬೆಳಗಾದ್ರೆ ಸಾಕು ಕೊರೆಯುವ ಚಳಿಯಲ್ಲೂ ಅವರು ಆರೆಂದ್ರೆ ಆರು ಗಂಟೆಗೆ ಎದ್ದು ಚೀಲ ಹಿಡಿದು ಪರೇಡ ಹೊರಡುತ್ತಾರೆ ಎಲ್ಲರೂ ಸೇರಿಕೂಂಡು ಹೊರಟರು ಸ್ವಲ್ಪ ಸಮಯದಲ್ಲೆ ಅವರೆಲ್ಲರು ಮಿಂಚಿನಂತೆ ಮಾಯವಾಗುತ್ತಾರೆ.
ಬಸ್ ನಿಲ್ದಾಣ, ರೈಲು ನಿಲ್ದಾಣ,ಸಿನಿಮಾ,ಪಾರ್ಕ್,ಹೋಟೆಲ್ ಹೀಗೆ ಎಲ್ಲೆಂದರಲ್ಲಿ ಗಸ್ತು ತಿರುಗುವ ಈ ಮಕ್ಕಳು ಅಮ್ಮಾ ಎಂದು ಬಿಕ್ಷೆ ಬೇಡುತ್ತಿರುವಾಗ ಅವಳ ತಾಯಿ ಇನ್ನಾವುದು ಸ್ಟಳದಲ್ಲಿ ಅಮ್ಮಾ ಎಂದು ಬಿಕ್ಷೆ ಬೇಡುತ್ತಿರುತ್ತಾಳೆ.ಈ ಮಕ್ಕಳನ್ನು ನೋಡಿ ನೀವು ಚಿಲ್ಲರೆ ಕಾಸು ಹಾಕಿದರೆ ಸರಿ ಇಲ್ಲವಾದರೆ ಅವರು ನಿಮ್ಮ ಕಾಲನ್ನೆ ಹಿಡಿದುಕೂಳ್ಳುತ್ತಾರೆ ಬಿಡುವದೇ ಇಲ್ಲ.
ಅಷ್ಟಕ್ಕೂ ಈ ಮಕ್ಕಳಿಗೆ ಈ ಕಸಬು ಅನಿವಾರ್ಯವೆ ಎಂದು ಯೋಚಿಸಿದಾಗ ಹೌದು ಅನಿವಾರ್ಯ ಇದಕ್ಕೆ ಕಾರಣ ಬಡತನ ಒಪ್ಪತ್ತಿನ ಅನ್ನಕ್ಕಾಗಿ ಯಾರಾರಿಗೊ ಅಮ್ಮಾ,ತಾಯಿ ಎಂದು ಕೂಗಿದರು ಇವರ ಕೂಗನ್ನು ಕೇಳಿ ಎಷ್ಟು ಜನ ತಾನೆ ಭೀಕ್ಷೆ ನಿಡ್ಯಾರು ಅವ್ರಿಗೆ ಗೊತ್ತು .
ಒಂದು ದಿನ ನಾನು ಫ್ಲ್ಯೆಓವರನಲ್ಲಿ ಹೊಗುವಾಗ ಒಂದು ಹುಡುಗ ಒಬ್ಬ ತಾಯಿಗೆ ಅಮ್ಮಾ ಎಂದು ಭಿಕ್ಷೆ ಕೇಳಿದ ಅದಕ್ಕೆ ಆ ತಾಯಿ ಅವನಿಗೆ ದಿನ ಬೆಳಗಾದರೆ ಏನ್ ಕಾಟನಪ್ಪ ನಿಮದು ಎಂದು ಹೊರಟುಹೊದಳು ನನಗೆ ಅಯ್ಯೋ ಪಾಪ ಅನಿಸಿತು ಆದರೆ ಆ ಹುಡಗನಿಗೆ ಅವನ ಜೀವನದಲ್ಲಿ ಇಂತಹ ಘಟನೆಗಳು ದಿನಬೆಳಗಾದರೆ ಎಷ್ಟು ನಡೆಯುತ್ತವೆಯೋ ಏನೋ ಯಾರು ಬಲ್ಲರು
ಈ ಮಕ್ಕಳ್ಳನ್ನು ಶಾಲೆಗೆ ಕಳುಹಿಸಿದರೆ ಮದ್ಯಾಹ್ನದ ಬಿಸಿಉಟ ಶಾಲೆಯಲ್ಲಿಯೇ ಆಗುತ್ತದೆ ನಿಜ ಆದರೆ ಮನೆಯವರ ಪರಸ್ಠಿತಿ? ಮಕ್ಕಳ ಮುಖ ನೋಡಿ ಯಾರಾದರು ಬಿಕ್ಷೆ ನಿಡುತ್ತಾರೆ ಅವರೇ ಶಾಲೆಗೆ ಹೋದರೆ ಮನೆಗೆ ತಂದು ಹಾಕುವರಾರು ಅದಕ್ಕೆಂದೆ ಅವರು ೬-೭ ಮಕ್ಕಳನ್ನು ಹೆರುತ್ತಾರೆ ಆದರೆ ಇಂತಹ ಮಕ್ಕಳನ್ನು ನೋಡಿ ಕೆಲವರು ಶಾಲೆಗೆ ಯಾಕೆ ಹೊಗಲ್ಲ ಎಂದು ಕೇಳಿದರೆ ಸಾಕು ಇವರ ಓಟ ಶುರುವಾಗುತ್ತೆ. ಅವರು ಯಾರ ಕೈಗೂ ಸಿಗುವದಿಲ್ಲ ಅಷ್ಟೊಂದು ಓಡುತ್ತಾರೆ ಹಾಗಾದರೆ ಇವರ ಮುಂದಿನ ಗತಿ ಏನು?

No comments:

Post a Comment